Thursday, March 4, 2010

ಅಂತರಾಳದ ಹಪಹಪಿ,,,,,,,,,

ಮನದಲಿ ಮೂಡಿದ ಹಿಮಾಲಯದ ಮಂಜುಗಡ್ಡೆಯ ಕುಳಿರ್-ಕೊರೆತವನ್ನು ಸಹಿಸಿಕೊಂಡು, ಸಹಿಸಿಕೊಂಡು ಮುಂದುವರೆದು ನಡೆದಾಗ ಕಾಣಿಸಿದ್ದು,ಪೂರ್ವಾಶ್ರಮದ ಪ್ರೇಯಸಿ... ಮುಖ ನೋಡಿದ ಕೂಡಲೇ ಬೆಚ್ಚಿಬಿದ್ದಂತಾದದ್ದು ಸುಳ್ಳಲ್ಲದಿದ್ದರೂ,ಬೆಚ್ಚಿದ್ದು ಯಾಕೆ ಅನ್ನೋದು ಪ್ರಶ್ನೆ.ಮನಸಿನಾಳದ ನಿಜವಾದ ಉತ್ತರವೆಂದರೆ ಅಂದು ಅಷ್ಟೊಂದು ಇಷ್ಟಪಟ್ಟು ಪ್ರೇಮಿಸಿದ್ದು,ಅವಳಿಗಾಗಿ ಪ್ರಾಣವನ್ನಾದರೂ ಕೊಡಲು ಸಿದ್ದವಾಗಿದ್ದು, ಮನೆಯ ಎಲ್ಲರ ಪ್ರೀತಿ-ನಂಬಿಕೆ ವಿಶ್ವಾಸಗಳನ್ನೂ ತ್ಯಜಿಸಿ ಅವಳಿಗಾಗಿ ಎಂತಹ ತ್ಯಾಗಕ್ಕೂ ಸಿದ್ದನಾಗಿದ್ದು,ಆ ಕಾಲದಲ್ಲಿ ನನಗೆ ಹೆಣ್ಣು ಕೊಡಲು ತುದಿಗಾಲಲ್ಲಿ ನಿಂತಿದ್ದ ಭಾರೀ ಜಮೀನ್ದಾರಿ ಮನೆತನದ ಸ್ಪುರದ್ರೂಪಿ ಹೆಣ್ಣನ್ನೂ ತಿರಸ್ಕರಿಸುವಂತೆ ಮಾಡಿದ್ದ ರೂಪಸಿ ಇವಳೇನಾ? ನಾನು ಅವಳಿಗಾಗಿ ಅಷ್ಟೊಂದು ಹಪಹಪಿಕೆುಂದ ಇರುವಾಗ ನನ್ನನ್ನು ತಿರಸ್ಕರಿಸಿ ಬೇರೊಬ್ಬನನ್ನು ಮದುವೆಯಾಗಿ ಚೆಂದದ ಸಂಸಾರ ಹೂಡಲು ಹೋದವಳು ಇವಳೇನಾ?..ಮತ್ತೊಮ್ಮೆ ಕಣ್ಣುಜ್ಜಿಕೊಂಡು ನೋಡಿದೆ..ಅವಳೇ.. ಆದರೆ ಇದೇನು? ಇಷ್ಟು ಚಿಕ್ಕ ವಯಸ್ಸಿಗೇ ನರೆತು ಹೋದ ಕೂದಲು. ಸುಕ್ಕುಗಟ್ಟಿದ ಮುಖ.ಗುಳಿ ಬಿದ್ದ ಕೆನ್ನೆಗಳು. ಬಾವಿಯಲ್ಲಿಳಿದ ಕಣ್ಣುಗಳು.ಸೊರಗಿ ಹೋದ ಶರೀರ..ಹೊಟ್ಟೆಗೆ ಹಿಟ್ಟಿಲ್ಲದಿದ್ದರೆ ಕ್ಲಿಯೋಪಾತ್ರ ಕೂಡ ಹೀಗೆಯೇ ಆಗುತ್ತಿದ್ದಳೇನೋ?... ಚೆನ್ನಾಗಿದ್ದೀರಾ?? ಅವಳು ಮಾತನಾಡಿಸಿದಳು..ಹೌದು ನಾನು ಚೆನ್ನಾಗಿದ್ದೇನೆ..ನೀನು ಹೇಗಿದ್ದೀಯ???ಕೇಳಲು ಹೊರಟವನಿಗೆ ಮಾತೇ ಹೊರಡಲಿಲ್ಲ..
---ಮ.ನಾ.ಕೃಷ್ಣಮೂರ್ತಿ mob-9449994934 e-mail-manaakrish44@gmail.com

No comments:

Post a Comment