Thursday, March 4, 2010

ಓವರ್ ಟು ಅರಳೀಕಟ್ಟೆ,,,,,,

ಓವರ್ ಟು ಅರಳೀಕಟ್ಟೆ,,,,,,

ಸಮಾಜ ಸ್ವಯಂಘೋಷಿತ ಆಧುನೀಕತೆ ಒಳಪಡಿಸಿಕೊಂಡ ನಂತರ, ನಮ್ಮ ಹಳ್ಳಿಗಳ ಅಂತರಂಗದಲ್ಲಿ ಜೀವನಾಡಿಗಳಾಗಿ ಒಂದಾಗಿ ಬೆರೆತು ಹೋಗಿದ್ದ ಅರಳಿಕಟ್ಟೆಗಳು ತಮ್ಮ ಗತವೈಭವವನ್ನು ಕಳೆದು ಕೊಳ್ಳುತ್ತಿವೆಯಾ? ಹೀಗೊಂದು ಪ್ರಶ್ನೆ ಮನದಾಳದಲ್ಲಿ ಮೂಡಿದ್ದು ಮೊನ್ನೆ ಊರಿಗೆ ಹೋದಾಗ,, ಅದೇಕೋ ಅರಳೀಕಟ್ಟೆ ದೀನವಾಗಿ ನನ್ನ ಕಡೆಗೆ ನೋಡಿತ್ತಾ? ಅಥವಾ ನನಗೆ ಹಾಗನ್ನಿಸಿತ್ತಾ? ಗೊತ್ತಿಲ್ಲ.ಹಿಂದೆಲ್ಲಾ ಅರಳೀಕಟ್ಟೆಗಳು ಎಷ್ಟೆಲ್ಲಾ ಗತವೈಭವದಿಂದ ಮೆರೆದಿದ್ದವು. ಊರಿನಲ್ಲಿ ಯಾವುದೇ ನ್ಯಾಯ ಪಂಚಾಯಿತಿಗಳು,ಹಳ್ಳಿಗೆ ಸಂಬಂಧಿಸಿದ ಯಾವುದೇ ವಿಷಯಗಳು ಚರ್ಚೆಯಾಗಿ ತೀರ್ಮಾನವಾಗುತ್ತಿದ್ದುದು ಈ ಅರಳೀಕಟ್ಟೆಗಳ ಮೇಲೆಯೇ, ಇವು ಹಳ್ಳಿಗರ ಜೀವನಾಡಿಗಳಲ್ಲಿ ಎಷ್ಟೊಂದು ಮಿಳಿತವಾಗಿರುತ್ತಿತ್ತೆಂದರೆ ಅವರ ನಡುವಿನ ಜಗಳಗಳಲ್ಲಿಯೂ ನಿನ್ನನ್ನು ಅರಳೀಕಟ್ಟೆಗೆ ಎಳೆದು ದಂಡ ಹಾಕಿಸ್ತೀನಿ ನೋಡ್ತಿರು ಎಂಬಂತಹ ಮಾತುಗಳು ಸರ್ವೇ ಸಾಮಾನ್ಯವಾಗಿರುತ್ತಿದ್ದವು,
ಹಬ್ಬ-ಹರಿದಿನ-ಹುಣ್ಣಿಮೆ ಗಳಲ್ಲಿ ಹಳ್ಳಿಯಜನ ಅರಳೀಕಟ್ಟೆಗಳ ಬಳಿ ಸೇರಿ ತಮ್ಮ ಸಂತೋಷಗಳನ್ನು ಹಂಚಿಕೊಳ್ಳುತ್ತಿದ್ದು ಸರ್ವೇ ಸಾಮಾನ್ಯವಾಗಿತ್ತು. ಅಂದಿನ ದಿನಗಳಲ್ಲಿ ಹಳ್ಳಿಗರು ತಮ್ಮ ಕಲೆ ಸಂಸ್ಕೃತಿ ಗಳನ್ನು ಪ್ರದರ್ಶಿಸಲು ಅರಳೀಕಟ್ಟೆ ಒಂದು ವೇದಿಕೆಯಾಗಿಯೂ ಕಾರ್ಯನಿರ್ವಹಿಸುತ್ತಿತ್ತು. ಅಷ್ಟೇ ಅಲ್ಲ, ಅರಳೀಕಟ್ಟೆ ಸುತ್ತಲು ಬರುತ್ತಿದ್ದ ಗ್ರಾಮಕನ್ಯೆಯರ ಕೃಪಾಕಟಾಕ್ಷಕಾಗಿ ಹಳ್ಳಿಹೀರೋಗಳ ದಂಡೇ ನೆರೆದಿರುತ್ತಿತ್ತು.ಹಳ್ಳಿಗೆ ಬರುವ ನಾಟಕ ತಂಡಗಳು, ಹೊಟ್ಟೆಹೊರೆಯಲು ಬರುತ್ತಿದ್ದ ಹಾವಾಡಿಗರು, ಗ್ರ್ರಾಮಾಫೋನ್ ಹಾಡಿಗೆ ತಮ್ಮದೇ ಶೈಲಿಯಲ್ಲಿ ಕುಣಿಯುವವರು, ವ್ಯಾಪಾರಿಗಳು, ಅಲೆಮಾರಿಗಳು,ಇತ್ಯಾದಿ ಅನೇಕ ಜನರಿಗೆ ಅರಳೀಕಟ್ಟೆ ಪ್ರಧಾನ ಆದರೆ ತಾತ್ಕಾಲಿಕ ವಾಸ್ತವ್ಯದ ಸ್ಥಳವಾಗಿಯೂ ಬಳಕೆಯಲ್ಲಿತ್ತು. ತಂದೆ ಮಕ್ಕಳ ನಡುವೆ ವೈಮನಸ್ಯ ತಲೆದೋರಿದಾಗ ಒಬ್ಬರು ಮುನಿಸಿಕೊಂಡು ಅರಳೀ ಕಟ್ಟೆಯ ಮೇಲೆ ಒಂದುರಾತ್ರಿ ಮಲಗಿದರೆಂದರೆ ಮರುದಿನ ಇಡೀ ಹಳ್ಳಿ ಸೇರಿ ಅವರ ಮಧ್ಯೆ ರಾಜೀ ಮಾಡಿಸುತ್ತಿದ್ದ ದಿನಗಳು ಮತ್ತೆ ಬರುವುದಿಲ್ಲವೇನೋ ಎನಿಸುತ್ತದೆ.ಈಗಂತೂ ಮಾತೆತ್ತಿದರೆ ಕೋಟರ್ು ಕಚೇರಿ ಎಂದು ಅಲೆದಾಡುವ ಮಂದಿಗೆ, ಇಂದು ಕೋರ್ಟುಗಳಲ್ಲಿ ವರ್ಷಾನುಗಟ್ಟಲೆ ತೆಗೆದುಕೊಳ್ಳುವ ನ್ಯಾಯನಿರ್ಣಯಗಳು ಅಂದಿನ ಅರಳೀಕಟ್ಟೆಗಳಲ್ಲಿ ಕೆಲವೇ ನಿಮಿಷಗಳಲ್ಲಿ ತೀರ್ಮಾನವಾಗಿ ಬಿಡುತ್ತಿದ್ದ ಸತ್ಯಗಳೇಕೆ ಅರಿವಾಗುತ್ತಿಲ್ಲವೋ ತಿಳಿಯುತ್ತಿಲ್ಲ.ಅಂದು ಅರಳೀಕಟ್ಟೆ ನ್ಯಾಯವೆಂಬುದು ಅಬ್ಬಬ್ಬಾ ಎಂದರೆ ಬೆಳಿಗ್ಗೆ ಹತ್ತು ಗಂಟೆಗೆ ಪ್ರಾರಂಭವಾಗಿ ಮಧ್ಯಾಹ್ನ ಹನ್ನೆರಡಕ್ಕೆ ಮುಕ್ತಾಯ ಹಾಗೂ ತೀರ್ಪು ಪ್ರಕಟಣೆ ಎಲ್ಲವೂ ಆಗಿಹೋಗುತ್ತಿತ್ತು. ಊರಿನ ಉತ್ಸವಗಳಲ್ಲಿ ಅರಳೀಕಟ್ಟೆ ಸಿಂಗರಿಸಿಕೊಂಡು ನವವಧುವಿನಂತೆ ಕಂಗೊಳಿಸುತ್ತಿತ್ತು. ಅರಳೀ ಕಟ್ಟೆಯ ನಾಗರಕಲ್ಲುಗಳಿಗೆ ವಿಶೇಷ ಪೂಜೆ ನಡೆಯುತ್ತಿತ್ತು.ಅಂದಿನ ಅರಳೀ ಕಟ್ಟೆಗಳು ಬರೀ ನ್ಯಾಯಪಂಚಾಯಿತಿಗಳಿಗಷ್ಟೇ ಸೀಮಿತವಾಗಿರಲಿಲ್ಲ. ಸಂಜೆಯಾದರೆ ಇಡೀ ಊರಿನ ಜನ ತಮ್ಮ ಹೊಲದ ಕೆಲಸಗಳನ್ನು ಮುಗಿಸಿಕೊಂಡು ಅರಳೀಕಟ್ಟೆಯ ಬಳಿ ಸೇರುತ್ತಿದ್ದರು. ಅಲ್ಲಿ ಹಳ್ಳಿಗೆ ಸಂಬಂಧಿಸಿದ ವಿಚಾರಗಳು. ಬೆಳೆಗಳ ಬಗೆಗಿನ ಸಮಾಚಾರಗಳು, ರಾಜಕೀಯ ವಿಚಾರಗಳೆಲ್ಲವೂ ಚರ್ಚೆಯಾಗುತ್ತಿದ್ದವು. ಅರಳೀಕಟ್ಟೆಗಳಿಂದಾಗಿ ಅಂದಿನ ಜನಕ್ಕೆ ತಾವು ಹಳ್ಳಿಯಲ್ಲಿ ಒಬ್ಬಂಟಿಗರೆಂಬ ಭಾವನೆ ಎಂದಿಗೂ ಸುಳಿಯುತ್ತಿರಲಿಲ್ಲ. ಅಕಸ್ಮಾತ್ ಯಾರಿಗಾದರೂ ಖಾಯಿಲೆ ಕಸಾಲೆಯೋ ಆಗಿ ಅರಳೀಕಟ್ಟೆಯಲ್ಲಿ ಪ್ರಸ್ತಾಪವಾಯಿತೆಂದರೆ ಮುಗಿುತು. ಇಡೀ ಊರಿನ ಜನತೆ ಅದು ತಮ್ಮವರಿಗೇ ಬಂದ ತೊಂದರೆಯೆಂಬಂತೆ ಸ್ಪಂದಿಸುತ್ತಿದ್ದರು. ಹಾಗಾಗಿ ತಾವು ಏಕಾಂಗಿಗಳೆಂಬ ಭಾವನೆ ಯಾರಿಗೂ ಸುಳಿಯುತ್ತಿರಲಿಲ್ಲ. ಆದರೆ,,,,,,ಇಂದು ಅರಳೀಕಟ್ಟೆಗಳು ಪಾಳುಬಿದ್ದ ಪಳಯುಳಿಕೆಗಳಂತೆ ಹಳ್ಳಿಗಳ ನಡುವೆ ತಾವೇ ಏಕಾಂಗಿಗಳಾಗಿಬಿಟ್ಟಂತೆ ಕಾಣುತ್ತಿವೆ. ಆಧುನೀಕತೆಗೆ ಮಾರುಹೋದ ಹಳ್ಳಿಹೀರೋ/ಯಿನ್ಗಳು (ಕ್ಷಮೆುರಲಿ) ಯುವಜನಾಂಗ ನಗರಕ್ಕೆ ವಲಸೆ ಬಂದು ಅತ್ತ ಪೂರ್ತಿ ಹಳ್ಳಿಯ ಸೊಗಡನ್ನೂ ಉಳಿಸಿಕೊಳ್ಳಲಾರದೆ ಇತ್ತ ಪೂರ್ಣವಾಗಿ ನಗರದ ಜೀವನಶೈಲಿಗೂ ಒಗ್ಗಿಕೊಳ್ಳಲಾರದೆ ಒದ್ದಾಡುತ್ತಿರುವುದನ್ನು ನೋಡಿದರೆ ಅರ್ಥವಾಗದ ತಳಮಳ ಆವರಿಸುತ್ತದೆ. ಇನ್ನು ನಗರಕ್ಕೆ ವಲಸೆ ಬಂದ ಹಳ್ಳಿಗರು ತಾವೇ ಅಸ್ತಿತ್ವ ಕಳೆದುಕೊಳ್ಳುವ ಸ್ಥಿತಿಯಲ್ಲಿರುವಾಗ ತಮ್ಮ ಊರಿನ ಅರಳೀಕಟ್ಟೆಗಳ ಬಗ್ಗೆ ಆಸ್ಥೆ ವಹಿಸುತ್ತಾರೆಯೆ?ಅದಕ್ಕೆಂದೇ ಆಂಧ್ರ ಮುಖ್ಯಮಂತ್ರಿಯಾಗಿದ್ದ ದಿವಂಗತ. ವೈ.ಎಸ್.ಆರ್. ತಮ್ಮ ಸರಕಾರಿ ಕಾರ್ಯಕ್ರಮದ ಯೋಜನೆಗಳಲ್ಲಿಯೇ ರಚ್ಚಬಂಡ ಯೋಜನೆ(ಅರಳೀಕಟ್ಟೆ)ಯನ್ನೂ ಹಮ್ಮಿಕೊಂಡಿದ್ದರು. ಅದರ ಉದ್ಘಾಟನೆಗಾಗಿ ಹೊರಟಾಗಲೇ ಅವರು ಹೆಲಿಕಾಪ್ಟರ್ ಅಪಘಾತಕ್ಕೆ ತುತ್ತಾದದ್ದು ವಿಧಿವಿಪರ್ಯಾಸ.ಅದೇನೇ ಇರಲಿ, ಹಳ್ಳಿಗರೆಲ್ಲಾ ನಗರಕ್ಕೆ ವಲಸೆ ಬಂದು ಅಸ್ಥಿತ್ವ ಅರಸುತ್ತಿರುವ ಈ ಕಾಲದಲ್ಲಿಯೂ ನನ್ನ ಮಿತ್ರ ಹಾಗೂ ಸಹೋದ್ಯೋಗಿ ನಾಗರಾಜು ಮೆಚ್ಚುಗೆಯಾಗುತ್ತಾನೆ. ಆತ ಕರ್ನಾಟಕ ಸರಕಾರಿ ಸ್ವಾಮ್ಯದ ಎಂ.ಎಸ್.ಐ.ಎಲ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾನೆ. ಸಂಸ್ಥೆಗೆ ಸೇರಿದಂದಿನಿಂದ ಬೆಂಗಳೂರಿನಲ್ಲಿರಲು ಸಾಕಷ್ಟು ಅನುಕೂಲತೆಗಳಿದ್ದರೂ ಕೂಡಾ ಆತನ ಹುಟ್ಟೂರಾದ ಗೌರೀಬಿದನೂರಿನ ವಾಟದಹೊಸಹಳ್ಳಿುಂದ ದಿನವೂ ಬೆಂಗಳೂರಿಗೆ ಬಂದು ಹೋಗುತ್ತಾನೆ. ಅದಕ್ಕಿಂತ ಮುಖ್ಯವಾದ ವಿಚಾರವೆಂದರೆ ಕಳೆದವಾರ ಆತನ ಹುಟ್ಟೂರಿನಲ್ಲಿ ತನ್ನದೇ ಖರ್ಚಿನಲ್ಲಿ ಒಂದು ಅರಳೀಕಟ್ಟೆಯನ್ನು ಕಟ್ಟಿಸಿದ್ದಾನೆ.ಅದರ ಉದ್ಘಾಟನೆಯನ್ನೂ ವೈಭವವಾಗಿಯೇ ಮಾಡಿದ್ದಾನೆ. ಆ ಮೂಲಕ ಅರಳೀಕಟ್ಟೆಗಳ ಗತವೈಭವವನ್ನು ಮರಳಿ ತರಲು ತನ್ನದೊಂದು ಪುಟ್ಟಪ್ರಯತ್ನವನ್ನು ಮಾಡಿದ್ದಾನೆ.ಆತನ ಪ್ರಯತ್ನಕ್ಕೆ ನಿಮ್ಮಿಂದ ಒಂದು ಶ್ಲಾಘನೆಯಿರಲಿ,,,,,,,--ಮ.ನಾ.ಕೃಷ್ಣಮೂರ್ತಿ ಮೊ.9449994934 e-mail-manaakrish44@gmail.com

No comments:

Post a Comment